ಕ್ರಿಯಾ ಯೋಗ ಶಿಬಿರ ಸೆಪ್ಟೆಂಬರ್ 2023

ಸೆಪ್ಟೆಂಬರ್ 15ರಿಂದ 17ರ ವರೆಗೆ ಬೆಂಗಳೂರಿನ ವೈಎಸ್ ಎಸ್ ಧ್ಯಾನ ಕೇಂದ್ರದವರು ಬೆಂಗಳೂರಿನಲ್ಲಿ ಕ್ರಿಯಾ ಯೋಗ ಶಿಬಿರವನ್ನು ಏರ್ಪಡಿಸಿದ್ದರು. ಈ ಶಿಬಿರದಲ್ಲಿ 900ಕ್ಕೂ ಹೆಚ್ಚು ಸಾಧಕರು ಭಾಗವಹಿಸಿ, ಮನಸ್ಸಿಗೆ ಶಾಂತಿ ನೀಡುವ ಹಾಗೂ ಸ್ವ-ಉನ್ನತೀಕರಣಕ್ಕೆ ದಾರಿ ತೋರುವ ಕ್ರಿಯಾ ಯೋಗ ವೈಜ್ಞಾನಿಕ ತಂತ್ರದ ಬಗ್ಗೆ ಹೆಚ್ಚಿನ ಅರಿವನ್ನು ಪಡೆದರು. ಕ್ರಿಯಾ ಯೋಗದ ಬಗ್ಗೆ ವಿಶ್ವಕ್ಕೆ ಮೊಟ್ಟಮೊದಲು ತಿಳಿಸಿದ ಶ್ರೀ ಶ್ರೀ ಪರಮಹಂಸ ಯೋಗಾನಂದರ ಜಗದ್ವಿಖ್ಯಾತ ಕೃತಿಯಾದ "ಯೋಗಿಯ ಆತ್ಮಕಥೆ"ಯ (ಆಟೋಬಯಾಗ್ರಫಿ ಆಫ್ ಎ ಯೋಗಿ) ಇ-ಬುಕ್ (ಡಿಜಿಟಲ್ ಆವೃತ್ತಿ) ಅನ್ನು ಹಿರಿಯ ಸನ್ಯಾಸಿಗಳಾದ ಶ್ರೀ ಶುದ್ಧಾನಂದ ಗಿರಿಯವರು ಸೆಪ್ಟೆಂಬರ್ 15ರಂದು ಲೋಕಾರ್ಪಣೆ ಮಾಡಿದರು.