ಶ್ರೀಪೆರಂಬದೂರ್ ಏಕಾಂತದಲ್ಲಿ ವಿಶೇಷ ವಿಶ್ರಾಂತಿ

ಆತ್ಮೀಯ ದಿವ್ಯಾತ್ಮರೆ 🙏 ಜೈ ಗುರು!

🌷 ಸೆಪ್ಟೆಂಬರ್ 21 ಮತ್ತು 22 ಶನಿವಾರ ಮತ್ತು ಭಾನುವಾರ ಆಧ್ಯಾತ್ಮಿಕ ಸಾಧಕ ಬಂಧುಗಳಿಗಾಗಿ ಕನ್ನಡದಲ್ಲಿ ವಿಶೇಷವಾಗಿ ಶಿಬಿರವನ್ನು (Retreat) ಏರ್ಪಡಿಸಲಾಗಿದೆ.

🌷 ಶಿಬಿರದಲ್ಲಿ ವೈ ಎಸ್ ಎಸ್ ಧ್ಯಾನತಂತ್ರಗಳನ್ನು  ಹೇಳಿಕೊಡುವುದರಿಂದ ಪುನರಾವಲೋಕನದ ದೃಷ್ಟಿಯಿಂದ ಸಾಧಕರಿಗೆ ಹಾಗೂ ವೈ ಎಸ್ ಎಸ್  ಪಾಠಗಳಿಗೆ ಹೊಸದಾಗಿ ಹೆಸರನ್ನು ನೋಂದಾಯಿಸಿರುವ ಭಕ್ತರಿಗೆ ಇದು ಉತ್ತಮ ಅವಕಾಶವಾಗಿರುತ್ತದೆ. 

🌷 ಶಿಬಿರದಲ್ಲಿ ಚೈತನ್ಯದಾಯಕ ವ್ಯಾಯಾಮ, ಧ್ಯಾನ, ಸತ್ಸಂಗ, ಧ್ಯಾನ ತಂತ್ರಗಳ ತರಗತಿಗಳು, ವೈಯಕ್ತಿಕ ಸಮಾಲೋಚನೆ (counselling) ಒಳಗೊಂಡಂತೆ ವೈಯಕ್ತಿಕ ಸಾಧನೆಗಾಗಿ ಸಹ ವ್ಯವಸ್ಥೆ ಇರುತ್ತದೆ.  ಜೊತೆಗೆ ಎರಡೂ ದಿನ ಭಜನ್ ಕಾರ್ಯಕ್ರಮ ಸಹ ಇರುತ್ತದೆ.

🌷 ದಿನಾಂಕ:  ಸೆಪ್ಟಂಬರ್ 21- 22 ಶನಿವಾರ ಮತ್ತು ಭಾನುವಾರ. 
🌷 ಸ್ಥಳ: ಶ್ರೀಪೆರುಂಬುದುರ್ ಧ್ಯಾನದ ಶಿಬಿರ.
🌷 ಶುಲ್ಕ: ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ. 

 ಮೊದಲು ಬಂದವರಿಗೆ ಆದ್ಯತೆ. ಆದ್ದರಿಂದ ಆದಷ್ಟು ಬೇಗ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಪ್ರಾರ್ಥನೆ. {ರೈಲಿನ ಟಿಕೆಟ್ ಅನ್ನು ಮುಂಚಿತವಾಗಿ ಕಾಯ್ದಿರಿಸುವುದು ಅಪೇಕ್ಷಿತ}       

ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ಸಂಖ್ಯೆ: 
9880628459 - 9591075339.

ವಿಳಾಸ: ಯೋಗದಾ ಸತ್ಸಂಗ ಧ್ಯಾನ ಕೇಂದ್ರ. ಚೆನ್ನೈ ಧ್ಯಾನ ಶಿಬಿರ.
 ಮಣ್ಣೂರು ವಿಲೇಜ್.
 ಪೋಸ್ಟ್ ವಲ್ಲಾರ್ ಪುರಂ.
ತಾಲೂಕು ಶ್ರೀಪೆರುಂಬುದುರ್, ಕಂಚಿಪುರಂ. ತಮಿಳ್ ನಾಡು - 602105.    

Website: https://chennairetreat.ysskendra.org